ಬನ್ನಂಜೆ ಸುವರ್ಣರಿಗೆ ಶಿವರಾಮ ಕಾರಂತ ಪ್ರಶಸ್ತಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ನವ೦ಬರ್ 21 , 2013
|
ನವ೦ಬರ್ 21 , 2013
|
ಬನ್ನಂಜೆ ಸುವರ್ಣರಿಗೆ ಶಿವರಾಮ ಕಾರಂತ ಪ್ರಶಸ್ತಿ
ದೆಹಲಿ :
ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಅನುಪಮ ಕೊಡುಗೆಗಾಗಿ ಬನ್ನಂಜೆ ಸಂಜೀವ ಸುವರ್ಣ ಮತ್ತು ಪರಿಸರ ಸಂರಕ್ಷಣೆಗಾಗಿ ದುಡಿದ ಸಾಲುಮರದ ತಿಮ್ಮಕ್ಕ ಅವರಿಗೆ ದೆಹಲಿ ಕರ್ನಾಟಕ ಸಂಘವು ಡಾ.ಶಿವರಾಮ ಕಾರಂತ ಪ್ರಶಸ್ತಿ ಘೋಷಿಸಿದೆ. ದೆಹಲಿ ಕರ್ನಾಟಕ ಸಂಘ ಎರಡು ವರ್ಷಕ್ಕೊಮ್ಮೆ ನೀಡುವ ಈ ಪ್ರಶಸ್ತಿಯು 25 ಸಾವಿರ ರೂ., ಅಭಿನಂದನಾ ಪತ್ರ, ಸ್ಮರಣಿಕೆಗಳನ್ನು ಒಳಗೊಂಡಿದೆ. ಯಕ್ಷಗಾನದಲ್ಲಿ ವಿಶೇಷ ಪರಿಣತಿ ಸಾಧಿಸಿ ವಿವಿಧ ಪ್ರಯೋಗಗಳನ್ನು ಮಾಡಿರುವ ಸಂಜೀವ ಸುವರ್ಣ ಮತ್ತು 8000ಕ್ಕೂ ಮಿಕ್ಕಿ ಮರಗಳನ್ನು ಬೆಳೆಸಿರುವ ಸಾಲುಮರದ ತಿಮ್ಮಕ್ಕ ಅವರಿಗೆ ಕ್ರಮವಾಗಿ 2010, 2012ನೇ ಸಾಲಿನ ಡಾ. ಶಿವರಾಮ ಪ್ರಶಸ್ತಿಯನ್ನು ನ.15ರಂದು ಭೂಸಾರಿಗೆ ಸಚಿವ ಅಸ್ಕರ್ ಫರ್ನಾಂಡಿಸ್ ಪ್ರದಾನ ಮಾಡಲಿದ್ದಾರೆ ಎಂದು ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಪ್ರಕಟಿಸಿದರು.
|
|
|